ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕರಾವಳಿಯ ಗಂಡು ಮೆಟ್ಟಿನ ಕಲೆಯ ಅಂತರಂಗ ಬಿಡಿಸಿಟ್ಟ ಪ್ರಾತ್ಯಕ್ಷಿಕೆ

ಲೇಖಕರು : ಯಶೋಧರ ಕೋಟ್ಯಾನ್, ಮೂಡುಬಿದಿರೆ
ಭಾನುವಾರ, ಡಿಸೆ೦ಬರ್ 22 , 2013
ಇದೊಂದು ವಿಶೇಷ ಕಾರ್ಯಕ್ರಮ. ಕರಾವಳಿ ಕರ್ನಾಟಕದ ಯಕ್ಷಗಾನ ವೇಷಗಳ ವರ್ಣ ವೆಭವ ಇಲ್ಲಿ ಸಾಕಾರಗೊಂಡಿತು. ಯಕ್ಷಗಾನವನ್ನಷ್ಟೇ ನೋಡಿದವರಿಗೆ ಅಲ್ಲಿ ಬಳಕೆಯಾಗುವ ವೇಷಗಳ ಬಗ್ಗೆ ಅಪೂರ್ವ ಒಳನೋಟ ಪಡೆಯುವ ಅವಕಾಶ ಸಿಕ್ಕಿತು.

ಇದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಜನಪದ ಸಿರಿ ವೇದಿಕೆಯಲ್ಲಿ ಭಾನುವಾರ ನಡೆದ ವಿಶಿಷ್ಟ ಕಾರ್ಯಕ್ರಮ. ರಾಜ ವೇಷದ ಭೂಷಣ, ಬಣ್ಣದ ವೇಷಗಳ ರೌದ್ರ ಮುಖವರ್ಣಿಕೆ, ಸ್ತ್ರೀ ವೇಷಗಳ ಶೃಂಗಾರ, ಪುಂಡುವೇಷಗಳ ೀಂಗಣ ಎಲ್ಲವೂ ವೇದಿಕೆಯಲ್ಲಿ ಅನುರಣನ.

ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಅಶ್ವಿನಿ ಗಮನಸೆಳೆದರೆ, ಚೆಂಡೆಯಲ್ಲಿ ದಿವ್ಯಶ್ರೀ ಮಿಂಚಿದರು. ಪ್ರದರ್ಶನದಲ್ಲಿ ಭಾಗವಹಿಸಿದವರೆಲ್ಲ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ. ಯಕ್ಷಗಾನ ವೇಷಗಳ ಬಗ್ಗೆ ಪಾತ್ಯಕ್ಷಿಕೆ ಮತ್ತು ಪಾತ್ರ ವಿವರಣೆಯನ್ನು ಕಲಾವಿದ ಉಜಿರೆ ಅಶೋಕ್ ಭಟ್ ನೀಡಿದರು.

ಅರ್ಜುನ, ದೇವೇಂದ್ರ ಮುಂತಾದ ರಾಜವೇಷಗಳಲ್ಲಿ ನೀಲಿ ಅಂಗಿ, ಗುಂಡು ಕಿರೀಟ ಪ್ರಮುಖ ಆಕರ್ಷಣೆ. ಕರ್ಣ, ಕೌರವನಂಥ ರಾಜವೇಷಗಳಿಗೆ ಕೆಂಪು ಅಂಗಿ, ಕಿರೀಟ, ಕರ್ಣಪತ್ರೆ, ಎದೆ ಪಟ್ಟಿಗಳಲ್ಲಿ ಕಪ್ಪು ಗೊಂಡೆಗಳಿರುವುದು ವಿಶೇಷ. ಬಡಗುತಿಟ್ಟಿನ ರಾಜವೇಷದಲ್ಲಿ ಆಭರಣದ ಆಕೃತಿಗಳ ವ್ಯತ್ಯಾಸವಿರುತ್ತದೆ. ರಾಜವೇಷಗಳಲ್ಲಿ ಒಟ್ಟು 30 ಆಭರಣಗಳು ಹಾಗೂ 30 ಕಟ್ಟುಗಳು ಇರುತ್ತವೆ. ರಾಕ್ಷಸ ವೇಷಗಳಲ್ಲೂ ಅಷ್ಟೇ ಪ್ರಮಾಣದ ಆಭರಣ ಹಾಗೂ ಕಟ್ಟುಗಳು ಇರುತ್ತವೆ. ಸ್ತ್ರೀವೇಷಗಳಲ್ಲಿ ಅಷ್ಟೊಂದು ಆಭರಣಗಳಿರುವುದಿಲ್ಲ ಎನ್ನುತ್ತಾರೆ ಉಜಿರೆ ಅಶೋಕ್ ಭಟ್.

ಅಭಿಮನ್ಯು, ಬಭ್ರುವಾಹನ ಮುಂತಾದ ವೇಷಗಳನ್ನು ಪ್ರತಿನಿಸುವ ಪುಂಡು ವೇಷದಲ್ಲಿ ಪಗಡಿ, ತುರಾಯಿ, ಡಾಬು, ವಿಶೇಷವಾದರೆ ಸ್ತ್ರೀ ವೇಷಗಳಿಗೆ ಸೌಮ್ಯ ಬಣ್ಣ, ಚೌಕುಳಿ ಸೀರೆ, ಡಾಬು, ಆಭರಣಗಳು ಪ್ರಧಾನ. ಬಣ್ಣದ ವೇಷಗಳೆಂದರೆ ವರ್ಣನಾತೀತ ಬಣ್ಣಗಳಲ್ಲ. ನಾನಾ ಬಣ್ಣಗಳಿದ್ದರೂ ಅದು ರಾಕ್ಷಸ ವೇಷಗಳ ಧ್ಯೋತಕ. ಅಕ್ಕಿ ಹಿಟ್ಟು, ಮತ್ತು ಸುಣ್ಣ ಕಲಸಿ ಚಿಟ್ಟಿ ಇಡುವುದು, ಮುಳ್ಳಿನಾಕಾರದ ಬಣ್ಣ ಬರೆಯುವುದು ಸಾಮಾನ್ಯ.

ತೆಂಕುತಿಟ್ಟಿನ ಬಣ್ಣದ ವೇಷದಲ್ಲಿ ಕೇಶವಾರಿ (ತಡ್ಪೆ) ಕಿರೀಟ ಪ್ರಧಾನ. ಉಪಬಣ್ಣದ ವೇಷಗಳಲ್ಲಿ ಭೀಮನ ಮುಡಿ ಕಿರೀಟವಿರುತ್ತದೆ. ಬಡಗುವಿನ ಶೂರ್ಪನಖಿ, ಕರಾಳನೇತ್ರೆಯಂಥ ಹೆಣ್ಣು ಬಣ್ಣದ ವೇಷಗಳಲ್ಲಿ ಬಕೆಟ್ ಆಕಾರದ ಕಿರೀಟ, ಲಾಲಿತ್ಯದ ದ್ಯೋತಕವಾಗಿ ನವಿಲುಗರಿ. ಕೆಂ ಪುಮುಖವರ್ಣಿಕೆ ಮುಖ್ಯ. ಪ್ರಮೀಳೆ, ಭ್ರಮರ ಕುಂತಳೆಯಂಥ ಕಸೆ ಸ್ತ್ರೀವೇಷಗಳು ಪ್ರೌಢತೆಯನ್ನು ಪ್ರತಿನಿಧಿಸುತ್ತವೆ. ಹಾಸ್ಯ ಪಾತ್ರಗಳಲ್ಲೂ ರಾಜ ಹಾಸ್ಯ ಮತ್ತು ರಾಕ್ಷಸ ಹಾಸ್ಯಗಳೆಂಬ ವಿಧಗಳಿರುತ್ತವೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಧೀಂಗಿಣ ಕೂಟದ ನಿರ್ದೇಶಕ ಸದಾಶಿವ ಶೆಟ್ಟಿಗಾರ್ ನೇತತ್ವದಲ್ಲಿ ಪ್ರಾತ್ಯಕ್ಷಿಕೆ ನೆರವೇರಿಸಿಕೊಟ್ಟರು.

ಕಾಲಮಿತಿ ಆಟ ಅನಿವಾರ್ಯ: ಯಕ್ಷಗಾನವೂ ಸೇರಿದಂತೆ ಯಾವುದೇ ಕಲಾ ಪ್ರದರ್ಶನಗಳು ಕಾಲಮಿತಿಗೆ ಒಳಪಡುವುದು ಅನಿವಾರ್ಯ. ಕಾಲನ ಕರೆಗೆ ಓಗೊಡದಿದ್ದರೆ ಆ ಕಲೆಯು ಕಾಲಗರ್ಭ ಸೇರುವ ಅಪಾಯವಿದೆ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.'ಕರಾವಳಿ ಕರ್ನಾಟಕ ಯಕ್ಷಗಾನ ಪರಂಪರೆಗಳು' ವಿಷಯದ ಬಗೆ ಅವರು ಉಪನ್ಯಾಸ ನೀಡಿದರು.

ಯಕ್ಷಗಾನ ಪ್ರದರ್ಶನವೂ ಕಾಲಮಿತಿ ವ್ಯಾಪ್ತಿಗೆ ಬರುವುದು ತಪ್ಪಲ್ಲ. ಪ್ರತಿಯೊಂದರಲ್ಲೂ ಬದಲಾವಣೆ ಸಹಜ. ಹಾಗಂತ ಬದಲಾವಣೆ ಅಥವಾ ಪ್ರಯೋಗದ ಹೆಸರಲ್ಲಿ ಯಕ್ಷಗಾನ ಕ್ಷೇತ್ರದೊಳಗೆ ವೆರಸ್ ಬರಬಾರದು. ಒಂದು ಸಲ ಒಳಗೆ ಬಂದರೆ ಅದು ಹೋಗುವುದಿಲ್ಲ. ಅದನ್ನೇ ಪರಂಪರೆ ಎಂದು ಬಿಂಬಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಮತ್ತು ತುಳು ಯಕ್ಷಗಾನಗಳ ವಿಸ್ತಾರ ಬಹುದೊಡ್ಡದು. ಬಹುಶಃ ಮಹಾರಾಷ್ಟ್ರದ ತಮಾಷಾ ಕಲೆಯನ್ನು ಬಿಟ್ಟರೆ ಯಕ್ಷಗಾನದ ಗಾತ್ರವು ದೇಶದಲ್ಲೇ ಅತಿದೊಡ್ಡದಾಗಿದೆ. ಇದರಲ್ಲಿ ತುಳು ಹಾಗೂ ಕನ್ನಡ ಯಕ್ಷಗಾನಗಳು, ವತ್ತಿ ಮೇಳಗಳು, ಹವ್ಯಾಸಿಗಳು ಸೇರಿದಂತೆ ವರ್ಷಕ್ಕೆ 40-42 ಪೂರ್ಣಾವಧಿ ಮೇಳಗಳು ಸೇರಿ ವರ್ಷಕ್ಕೆ ಸುಮಾರು 14,000 ಯಕ್ಷಗಾನ ಪ್ರದರ್ಶನಗಳನ್ನು ಮಾಡುತ್ತಿವೆ ಎಂದರೆ ಯಕ್ಷಗಾನದ ಹರವು, ಆಳ ಎಷ್ಟು ಎಂಬುದು ವೇದ್ಯವಾಗುತ್ತದೆ ಎಂದರು.

ಕನ್ನಡ ಯಕ್ಷಗಾನಗಳ ಜತೆ ತುಳು ಯಕ್ಷಗಾನಗಳೂ ಕೂಡ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತ್ತಿವೆ. ಇನ್ನು ಮುಂದೆ ಹರಕೆ ಮೇಳಗಳಲ್ಲಿಯೂ ತುಳು ಯಕ್ಷಗಾನಗಳನ್ನು ಆಡಿಸುವಂತಾಗಬೇಕು ಎಂದು ಸಲಹೆ ನೀಡಿದ ಅವರು, ಯಕ್ಷಗಾನವು ಕಾಲೋಚಿತವಾಗಿ ಹಾಗೂ ಕಲೋಚಿತವಾಗಿ ಸಂರಕ್ಷಣೆ, ಸಂವರ್ಧನೆ, ಪರಿಷ್ಕರಣೆ ಹಾಗೂ ವಿಸ್ತರಣೆ ಎಂಬ ನಾಲ್ಕು ಹಂತಗಳಲ್ಲಿ ಅಭಿವದ್ಧಿಯಾಗಬೇಕೆಂದರು..



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ